Sunday, December 9, 2012

" ಅವಳು ಮತ್ತೊಬ್ಬಳು " ರಶ್ಮಿ (ತೆಂಡೂಲ್ಕರ್) ಕಾಸರಗೋಡು - 09.12.12

ಚಿಕ್ಕವನಾಗಿದ್ದಾಗಿನಿಂದಲೂ ನಮ್ಮ ದೇಶದ ಅ(ನ)ಧಿಕೃತ ರಾಷ್ಟ್ರೀಯ ಆಟವೇ ಆಗಿ ಹೋಗಿರುವ ಕ್ರಿಕೆಟ್ ಬಗ್ಗೆ ತುಸು ಕಾಳಜಿ ಇತ್ತು...೧೯೮೩ ರಲ್ಲಿ ಕಪಿಲ್ ಡೆವಿಲ್ಸ್ ವಿಶ್ವ ಕಪ್ ಗೆದ್ದಾಗ ಅದು ಇನ್ನಷ್ಟು ಹೆಚ್ಚಿತು.  ಆಗ ಪಿಂಚ್ ಹಿಟ್ಟರ್ ಆಟವನ್ನು ಶುರು ಮಾಡಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ತುಂಬಾ ಪ್ರಸಿದ್ಧಿಯಾಗಿದ್ದರು. ನನ್ನ ಶಾಲಾ ದಿನಗಳಲ್ಲಿ ನನ್ನ ಸಹಪಾಟಿಗಳು ನನ್ನ ಕೆ.ಎಂ. ಶ್ರೀಕಾಂತ್ ಅನ್ನುವ ಬದಲು  ಕೃಷ್ಣಮಾಚಾರಿ ಶ್ರೀಕಾಂತ್ ಎಂದು ಕರೆಯುತಿದ್ದಿದ್ದು ಬಾಣಲೆಯಲ್ಲಿ ಪೂರಿ ಉಬ್ಬಿದಷ್ಟೇ ಸುಲಭವಾಗಿ ಮನಸ್ಸು ಹಾರಾಡುತಿತ್ತು....

ಅರೆ ಏನೋ ಬರೆಯುತಿದ್ದಾನೆ ಈ ಕ(ವಿ)ಪಿರಾಯ ಎಂದು ಮುನಿಸಿಕೊಳ್ಳಬೇಡಿ...ತನ್ನ ಹೆಸರಿನ ಜೊತೆಗೆ ತನ್ನ ನೆಚ್ಚಿನ ಕ್ರಿಕೆಟ್ ಆಟಗಾರನ ಹೆಸರನ್ನು ಸೇರಿಸಿಕೊಂಡು ಕಿಚ್ಚೆಬ್ಬೆಸಿಕೊಳ್ಳುವಷ್ಟು ಕ್ರೀಡಾಭಿಮಾನ ಮೆರೆಯುತ್ತಿರುವ                                      ರಶ್ಮಿ (ತೆಂಡೂಲ್ಕರ್) ಕಾಸರಗೋಡು ಅವರ ಎರಡನೇ ಕೃತಿಯಾದ " ಅವಳು ಮತ್ತೊಬ್ಬಳು " ಲೋಕಾರ್ಪಣೆ ಸಮಾರಂಭಕ್ಕೆ ಹೋದಾಗ ಮನದಲ್ಲಿ ಹಾರಾಡಿದ ಮಾತುಗಳು ಈ ಲೇಖನಕ್ಕೆ ಮುನ್ನುಡಿಯಾಯಿತು.

ಕ್ರಿಕೆಟ್ ಅಂಗಣದಂತೆ ನಿಧಾನವಾಗಿ ಪುಸ್ತಕ ಪ್ರೇಮಿಗಳು, ಬ್ಲಾಗ್ ಲೋಕದ ತಾರೆಗಳು, ಜಗಮಗಿಸುವ ಸಿನಿಮಾ, ರಂಗಭೂಮಿಯ ನಕ್ಷತ್ರಗಳು ಪತ್ರಿಕಾ ಲೋಕದ ಧ್ರುವತಾರೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಂತ್ರಿಕ ಸ್ಪರ್ಶ ಉಳ್ಳವರು ಎಲ್ಲರೂ ನಿಧಾನವಾಗಿ ಆಸೀನರಾಗುತಿದ್ದರು.

ಮುದ್ದು ಪುಟಾಣಿಯ ಸುಮಧುರ ಗೀತೆಯೊಂದಿಗೆ ಶುರುವಾದ ಕಾರ್ಯಕ್ರಮ ನಿಧಾನವಾಗಿ ಕಾವೇರತೊಡಗಿತು...ಶ್ರೀಮತಿ. ಸುಮತಿಯವರ ಸುಲಲಿತ ನಿರೂಪಣೆ ಸುಶ್ರಾವ್ಯ ಸಂಗೀತ ನಾದದಂತೆ ನಾವು ತಲೆದೂಗುವಂತೆ ಉಲಿಯುತ್ತಿತ್ತು...ನಂತರ ವೇದಿಕೆಯ ಮೇಲಿನ ಪ್ರತಿಯೊಬ್ಬ ಗಣ್ಯರ ಪರಿಚಯ, ಅವರ ಸಾಧನೆಗಳು, ಪರಿಶ್ರಮಗಳು, ಅದರ ಮಜಲುಗಳನ್ನ ಸುಲಲಿತವಾಗಿ ಪರಿಚಯ ಮಾಡಿಕೊಟ್ಟ ಅವರ ಪ್ರತಿಭೆ ಅಭಿನಂದನೀಯ.

ಮೊದಲಿಗೆ ಮಾತು ಆರಂಭಿಸಿದ ಕಿರುತೆರೆ ಹಾಗೂ ರಂಗಭೂಮಿ ಖ್ಯಾತಿಯ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಪುಸ್ತಕದ ಭಾವ ಪರಿಚಯವನ್ನು ಮಾಡಿಕೊಟ್ಟರು. ಮಹಿಳೆ ಎನ್ನುವ ಒಂದು ಪದವೇ ಸಾಕು ಶಕ್ತಿ ತುಂಬಲು, ಅಂತಹ ಅನೇಕ ಮಹಿಳಾ ಮಣಿಗಳ ಪುಸ್ತಕದ ಬಗ್ಗೆ ಹೇಳಿದ ಮಾತುಗಳು ಒಂದೊಂದು ನುಡಿಮುತ್ತುಗಳು.

ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀ. ಪುಂಡಲೀಕ ಹಾಲಂಬಿಯವರು ಕನ್ನಡ ನಾಡು, ಬರವಣಿಗೆ ಭಾಷೆ, ಲೇಖಕಿಯ ಪರಿಶ್ರಮ ಎಲ್ಲದರ ಬಗ್ಗೆ ಹೊರಬಂದ ಮಾತುಗಳು ಯಾವುದೇ ಸಾಧನೆಯ ಹಾದಿಯಲ್ಲಿರುವ ವ್ಯಕ್ತಿಗೆ ಜೀವ ಚೈತನ್ಯ ತುಂಬುವ ಹುಮ್ಮಸ್ಸಿನ ಶಕ್ತಿಯುತ ಔಷಧಿ.

ಬಣ್ಣದ ಜಗತ್ತು ವರ್ಣಮಯ ಅಲ್ಲಿ ಎಲ್ಲವು ಕನಸುಗಳ ಲೋಕವೇ ಎನ್ನುವ ಮಾತನ್ನು ಆಡುತ್ತಲೇ ತಮ್ಮೊಳಗಿನ ಓದುಗಾರ್ತಿಯನ್ನ ಪರಿಚಯ ಮಾಡಿಕೊಟ್ಟ ಕನ್ನಡದ ಪ್ರತಿಭೆ ನೀತು ಅವರ ನಿರರ್ಗಳ ಮಾತು ಸಿನಿಮಾ ಜಗತ್ತಿನ ಹಾಯಿ ದೋಣಿಯಲ್ಲಿ ಪಯಣಿಸಿದ ಅನುಭವ ಮೂಡಿಸಿ ಕೊಟ್ಟಿತು.

ಕನ್ನಡ ಪ್ರಭದ ಶ್ರೀ. ರಾಧಾಕೃಷ್ಣ ಭಡ್ತಿ ಅವರಿಗೆ ನೀರಿನಿಂದ ನೀರೆಯರ ಬಗ್ಗೆ ಮಾತಾಡುವ ಬಡ್ತಿ ಕೊಡಿಸಿದ ಈ ಸಮಾರಂಭದಲ್ಲಿ  ಅವರ ಮಾತುಗಳು ಬ್ಲಾಗ್ ಲೋಕ, ಸಾಹಿತ್ಯ ಲೋಕ, ಪತ್ರಿಕಾ ರಂಗ, ಭಾಷೆಯ ಅಭಿಮಾನ ವಿಷಯಗಳು ನಿರಾಳವಾಗಿ ನಮ್ಮ ಮನದಲ್ಲಿ ಹರಿದಾಡಲು ಶುರುಮಾಡಿದವು..

ಅಧ್ಯಕ್ಷ ಸ್ಥಾನದಲ್ಲಿದ್ದ ಹಿರಿಯ ಪತ್ರಕರ್ತರಾದ ಶ್ರೀ. ಜೋಗಿಯವರ ವಾಸ್ತವ ಮಾತುಗಳು, ಮಹಾಭಾರತದ ಸಣ್ಣ ಕತೆಯನ್ನು ವಾಸ್ತವಕ್ಕೆ ಹೋಲಿಸಿ ಮಾತಾಡಿದ ರೀತಿ ಗಮನಸೆಳೆಯಿತು.

ಇನ್ನೇನು ವಿಶೇಷ ಕಾರ್ಯಕ್ರಮವಿದೆ ಎನ್ನುವಾಗ ಮಹಿಳ ಮಣಿ ಕ್ರಿಕೆಟ್ ಬ್ಯಾಟನ್ನು ಬಿಟ್ಟು ಮೈಕ್ ಮುಂದೆ ನಿಂತರು.  ಈಗಿನ ಟ್ವೆಂಟಿ -೨೦ ಹೊಡಿ ಬಡಿ ಆಟಕ್ಕಿಂತ ರಭಸವಾಗಿದ್ದ ಮಾತುಗಳು ಶುರುವಾದವು ಲೇಖಕಿ ರಶ್ಮಿ ಕಾಸರಗೋಡು ಅವರಿಂದ.  ನಾವು ಬರಿ ಸಚಿನ್ ಸ್ಟ್ರೈಟ್ ಡ್ರೈವ್ ಬೌಂಡರಿ, ಸಿಕ್ಸರ್ ನೋಡಿದ್ದ ನಮಗೆ ಈ ಚುರುಕು ಮಾತುಗಳು, ಹೃದಯದಿಂದ ಮೂಡಿಬಂದ ಅನುಭಾವ ಅನಿಸಿಕೆಗಳು ವಾಹ್ ಎನ್ನುವಂತೆ ಮಾಡಿತು. ಈಕೆ ಬರಿ ಲೇಖಕಿ ಮಾತ್ರವಲ್ಲ ಅದ್ಭುತ ಮಾತುಗಾರ್ತಿ ಎನ್ನುವುದು ಅವರೇ ಹೇಳಿದ ಆಶುಭಾಷಣ ಸ್ಪರ್ಧೆಗಳ ಮಾತುಗಳಿಂದ ಧೃಡಪಟ್ಟಿತ್ತು...ಸ್ಲಾಗ್ ಓವರಿನ ಬ್ಯಾಟಿಂಗಿನಂತೆ ರನ್ನಗಳನ್ನ ರಶ್ಮಿಬಾರಿಸಿಬಿಟ್ಟರು....

ಸುಂದರ, ಸರಳ, ಕಾರ್ಯಕ್ರಮವನ್ನು ಅಭಿಮಾನ, ಗೆಳೆತನ, ವಿಶ್ವಾಸ ಇವುಗಳನ್ನೆಲ್ಲ ತುಂಬಿಕೊಂಡು ಬಂದಿದ್ದವರಿಗೆ ಒಂದು ಭಾನುವಾರ ಬೆಳಗನ್ನು ಅಚ್ಚುಕಟ್ಟಾಗಿ ಸಾರ್ಥಕತೆಯಿಂದ ಕಳೆದ ಬಗ್ಗೆ ಹೆಮ್ಮೆಯಿತ್ತು. ನೆಮ್ಮದಿಯಿಂದ ತುಂಬಿಬಂದ ಭಾರವಾದ ಹೃದಯಗಳನ್ನು ಹೊತ್ತು ತಮ್ಮ ತಮ್ಮ ಮನೆಗೆ ತೆರೆಳುತಿದ್ದಾಗ ಅಲ್ಲೇ ನಿಂತು ನೋಡುತಿದ್ದ ರಶ್ಮಿ...ಸಚಿನ್ ಶತಕ ಬಾರಿಸಿದಾಗ ಆಗಸಕ್ಕೆ ಮುಖ ಮಾಡಿ ಧನ್ಯತೆಯನ್ನು ಅನುಭವಿಸುತ್ತಿದ್ದ ರೀತಿ ನೆನಪಿಗೆ ಬಂತು.

ಈ ಸುಂದರ ಕಾರ್ಯಕ್ರಮಕ್ಕೆ ಹಾಜರಾಗಲು ಸೂಚಿಸಿದ ಇಟ್ಟಿಗೆ ಸಿಮೆಂಟ್ ಬ್ಲಾಗಿನ ಶ್ರೀ ಪ್ರಕಾಶ ಹೆಗಡೆಯವರಿಗೆ ವಂದನೆಗಳು.

ರಶ್ಮಿ ನಿಮ್ಮ ಎಲ್ಲ ಪ್ರಯತ್ನಗಳಲ್ಲಿ ಸಾಧನೆಗಳ ಹಾದಿಯಲ್ಲಿ ಯಶ ನಿಮ್ಮದಾಗಲಿ ಸೂರ್ಯನ ಯಶಸ್ಸಿನ ರಶ್ಮಿ ನಿಮ್ಮ ಬಾಲ ಪಥದಲ್ಲಿ ಸದಾ ಪಸರಿಸುತ್ತಿರಲಿ ಎನ್ನುವ ಹಾರೈಕೆಯೊಂದಿಗೆ ನಿಮ್ಮ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕರ್ಪನೆಯ ಸಂಧರ್ಭದಲ್ಲಿ  ಬ್ಲಾಗ್ ಲೋಕದ ಸ್ನೇಹಮಯ ಹೃದಯಗಳ ಪರವಾಗಿ ಶುಭಕೊರುತಿದ್ದೇನೆ..

Friday, November 16, 2012

ಸಂಸಾರ ಸಾಗರದಲ್ಲಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಅಜಾದ್ ಸರ್ ಮತ್ತು ಅಬಿದ ಮೇಡಂ!


ಮೀನು ಸಡಗರದಿಂದ ಓಡಾಡುತ್ತಿತ್ತು..ಅಲ್ಲೇ ನಿಧಾನವಾಗಿ ಬರುತಿದ್ದ ಬಟಾಣಿ ಕೇಳಿತು 

"ಏನಪ್ಪಾ ಮೀನಣ್ಣ..ಏನು ಬಹಳ ಖುಷಿಯಲ್ಲಿದ್ದೀಯ?"

"ಹೌದು ಬಟಾಣಿ..ಇವತ್ತು ಸುಮಧುರ ದಿನ..ನಿನಗೆ ಕಾಯ್ತಾ ಇದ್ದೆ"

"ಏನಪ್ಪಾ ಅದು ನಾನು ನೀನು ಎಷ್ಟು ಒಳ್ಳೆಯ ಗೆಳೆಯರು...ನನಗೆ ದಯವಿಟ್ಟು ಹೇಳು?"

"ನಮ್ಮ ಜೀವನವನ್ನು ಅಭ್ಯಸಿಸಿ..ನಾವು ಬರಿ ತಿನ್ನಲಷ್ಟೇ ಅಲ್ಲ ..ಅಧ್ಯಯನಕ್ಕೂ ನೆರವಾಗುತ್ತೇವೆ.ಅಂತ ತಿಳಿದ ಅನೇಕರಲ್ಲೊಬ್ಬರು ನಮ್ಮ ಪ್ರೀತಿಯ ಡಾಕ್ಟರ್ ಅಜಾದ್...ಅವರಿಂದ ನಮಗೂ ಒಂದು ಹೆಸರು..ನಮ್ಮಿಂದ ಅವರಿಗೂ ಒಂದು ಗೌರವ.. ಅಲ್ಲವೇ.."

"ಹೌದು ಮೀನಣ್ಣ..ನನ್ನ ಸಿಪ್ಪೆಯಿಂದ  ಬೇರ್ಪಡಿಸಿ ಪಾತ್ರೆಯಲ್ಲಿ ಹಾಕಿ ಬೇಯಿಸಿ ಮುಗಿಸುತ್ತಿದ್ದ ಜನರ ಮಧ್ಯೆ ... ನನ್ನನ್ನು ಪುಸ್ತಕದ ಪುಟದ ಮೇಲೆ ನನ್ನ ಮುದ್ದಾದ ಬೈತಲೆ ತೆಗೆದುಕೊಂಡಿರುವ ಚಿತ್ರ ಹಾಕಿ..ನನ್ನನ್ನು ಜಗಜ್ಜಾಹಿರು ಮಾಡಿದ ಕವಿ ಅಜಾದ್ ಬಹು ಅಪರೂಪದ ವ್ಯಕ್ತಿ.. ಅವರು ಅಂದರೆ ನನಗೆ ಬಹಳ ಇಷ್ಟ..ಗೌರವ..."

ಬಟಾಣಿ ಚಿಕ್ಕಿ!

"ಹೌದು ಬಟಾಣಿ...ಜಲನಯನ ಅಂತ ಕರೆದು ನನ್ನನ್ನು ಪದಗಳ ಶರಧಿಯಲ್ಲಿ ಈಜಾಡಲು ಬಿಟ್ಟಿದ್ದಾರೆ..."


ಜಲ ನಯನ! 

"ಮೀನಣ್ಣ ಇಂದು ಅವರು ಸಂಸಾರ ಸಾಗರದ ಬೆಳ್ಳಿ ಹಬ್ಬದ  ಸಂಭ್ರಮದಲ್ಲಿದ್ದಾರೆ...ಅಜಾದ್ ಸರ್ ಮತ್ತು ಅವರ ಸಂಸಾರದ ಸಾರಥಿ ಅಬಿದ ಮೇಡಂ ಮತ್ತು ಅವರ ಸುಖಿ ಸಂಸಾರಕ್ಕೆ ಶುಭಕಾಮನೆಗಳು...ಸದಾ ಅವರ ಸಂಸಾರ... ಸುಖ ಸಂಸಾರದ ಸಾಗರದಲ್ಲಿ ನೆಮ್ಮದಿ ಎನ್ನುವ ಮೀನು...ಬಟಾಣಿ ಎನ್ನುವ ಸಂತಸದ ಜೊತೆ ಚಿಕ್ಕಿ ಚುಕ್ಕಿ ಬಿಡಿಸುತ್ತ ಸಂಭ್ರಮಿಸಲಿ. ಎಂದು ಹಾರೈಸೋಣ..ಬಾ ಗೆಳೆಯ..."


ಸುಂದರ ಸಂಸಾರ!

"ಹೈ...ಬಟಾಣಿ..ಎಷ್ಟು ಸುಂದರವಾದ ಪದಗಳನ್ನು ಜೋಡಿಸಿ ಶುಭಾಶಯಗಳನ್ನು ಸಿದ್ಧ ಮಾಡಿದೀಯ..ನೀನು ನನ್ನ ಗೆಳೆಯ ಎನ್ನುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ.."

ಅಜಾದ್ ಸರ್..ಅಬಿದ ಮೇಡಂ..ವೈವಾಹಿಕ ಜೀವನದ ಬೆಳ್ಳಿಯ ಹಬ್ಬದಲ್ಲಿ ನಿಮ್ಮ ಸುಖಿ ಸಂಸಾರ ಸುವರ್ಣ ಪಥದತ್ತ ಸಾಗಲಿ..ಎಂದು ಬ್ಲಾಗ್ ಲೋಕದ ಎಲ್ಲ ನಕ್ಷತ್ರಗಳ ಜೊತೆಯಲ್ಲಿ ನಿಮ್ಮ ಮಿತ್ರರಾದ ಮೀನಣ್ಣ ಹಾಗು ಬಟಾಣಿ ನಿಮಗೆ ಈ ಸಂತಸದ ಘಳಿಗೆಯಲ್ಲಿ  ಶುಭಾಶಯಗಳನ್ನು ಕೋರುತಿದ್ದೇವೆ!!!

Thursday, August 23, 2012

ಕನ್ನಡನಾಡಿನ ರನ್ನದ ರತುನ-ಶತಮಾನದ ಅಜ್ಜಯ್ಯ ಪ್ರೊ.ಜಿ.ವಿ


"ಶತಮಾನಂ ಭವತಿ  
ಶತಾಯುಹ್  ಪುರುಷಃ  ಶತೇಂದ್ರಿಯಃ  
ಆಯುಶ್ಯೇವೆಂದ್ರಿಯೇ  ಪ್ರತಿತಿಷ್ಠತಿ"

ಚಿಕ್ಕ ವಯಸ್ಸಿನಿಂದಲೂ ಈ  ಶ್ಲೋಕ ಮಾತಾ-ಪಿತೃ, ಗುರುಹಿರಿಯರಿಗೆ ನಮಸ್ಕರಿಸಿದಾಗೆಲ್ಲ ಕಿವಿಯ ಮೇಲೆ ಬೀಳುತ್ತಿತ್ತು..

ಯಾರಾದರು ನೂರು ವಸಂತಗಳನ್ನು ಹೇಗೆ ಜೀವನ ಮಾಡಿ ಸುಖಿಸುತ್ತಾರೆ...ಇದೆಲ್ಲ ಸಾಧ್ಯವೇ....ಯಾರಾದರು ಕಣ್ಣಿಗೆ ಕಾಣುವ ಉದಾಹರಣೆಗಳು ಇದೆಯಾ ಎಂದು ಕೊಳ್ಳುತಿದ್ದಾಗ ತಟ್ಟನೆ ನೆನಪಿಗೆ ಬರುತಿದ್ದುದು ನಮ್ಮ ಕರುನಾಡಿನ ಮಾಂತ್ರಿಕ ತಾಂತ್ರಿಕ ಮೇಧಾವಿ ಸರ್. ಎಂ.ವಿ...ಅವರ ನಂತರ ಶ್ರೀ ಶಿವಕುಮಾರ ಸ್ವಾಮಿಗಳು ...ಕಾಯಕವೇ ಕೈಲಾಸ ಎಂಬುದನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಿದ್ದ ಈ ಮಹನೀಯರು ಸದಾ ಸ್ಮರಣೀಯರು..

ಸರಿ ನೂರು ಯುಗಾದಿ ಹಬ್ಬವನ್ನು ನೋಡಲು ಹೇಗಿರಬೇಕು..ಎನ್ನುವ ಪ್ರಶ್ನೆ ಬಂದಾಗ...

೧. ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಸಾಕು
೨. ಆಟದಲ್ಲಿ, ಪಾಠದಲ್ಲಿ, ಜೀವನದಲ್ಲಿ ಕ್ರಮ ಬದ್ಧವಾಗಿದ್ದರೆ ಸಾಕು..
೩. ಇಷ್ಟವಾದ ಕೆಲಸವನ್ನು ಕಷ್ಟವಾದರೂ ಸರಿ ಮಾಡಬೇಕು
೪. ಅಡ-ತಡೆಗಳು ದಾಟಿದರೆ ಅಲ್ಲವೇ ಮನುಜನ ಜನುಮದ ಗುರಿ ಸಾಧ್ಯ..
೫. ಇವಕ್ಕೆಲ್ಲ ಸಾಥ್ ನೀಡುವುದು ನಮ್ಮ ದೇಹ..ಅದನ್ನೇ ಶಿಸ್ತಿನಲ್ಲಿ ಇಟ್ಟರೆ..ಮೇಲೆ ಹೇಳಿದ ಎಲ್ಲವು ಸಾಧ್ಯ..

ಅಲ್ಲವೇ ಎಂದು ನನಗೆ ನಾನೇ ಕೇಳಿದಾಗ...ಹೌದು ಹೌದು ಎಂದಿತು ನನ್ನ ಮನಸು...ಯಾಕೆಂದರೆ...ಕಳೆದ ವರುಷ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಾಗ ಶತಕದ ಸಮೀಪದ ಪ್ರಾಯದ ಯುವ ಮನಸನ್ನು ನೋಡಿದ ತಣ್ಣನೆ ಅನುಭವವಾಯಿತು...
ಚಿತ್ರ ಕೃಪೆ - ಅಂತರ್ಜಾಲ
 ಕನ್ನಡಾಂಬೆಯ ಹೆಮ್ಮೆಯ ಪುತ್ರ..ಪ್ರೊ.ಜಿ.ವೆಂಕಟಸುಬ್ಬಯ್ಯ..ಸರಿ ಸುಮಾರು ೪-೫ ತಲೆಮಾರಿನ ಜನತೆಯನ್ನು ನೋಡಿರುವವರು..ತಮ್ಮೆಲ್ಲ ಸಮಯವನ್ನು ಕನ್ನಡದ ಪದಗಳ ಅಮೃತ ಕಡಲಲ್ಲಿ ಮುಳುಗಿ ಕನ್ನಡಾಭಿಮಾನಿಗಳನ್ನು ದಡಕ್ಕೆ ಸೇರಿಸುತ್ತಿರುವ ಈ ಮಹಾನ್ ಚೇತನ..ಇಂದು ನಮ್ಮ ಭೂರಮೆಯನ್ನು ಅಲಂಕರಿಸಿ ಒಂದು ಶತಮಾನ ಆಯಿತು..
ಚಿತ್ರ ಕೃಪೆ - ಅಂತರ್ಜಾಲ -  ಸತೀಶ್ ಶೃಂಗೇರಿ 
ಮೇಲೆ ಹೇಳಿದ ಆ ಶ್ಲೋಕಕ್ಕೆ ಇನ್ನೊಂದು ಪರ್ಯಾಯ ಸೂಚಿಸಲು ಬಹುಶಃ ಬ್ರಹ್ಮರ್ಷಿ ವಿಶ್ವಾಮಿತ್ರರೆ ಬರಬೇಕೇನೋ!!!...
ಯಾಕೆಂದರೆ..ಆ ಶ್ಲೋಕದಲ್ಲಿರುವ ಪ್ರತಿಯೊಂದು ಪದಕ್ಕೆ ಅರ್ಥಸಹಿತ ಸಾಕ್ಷ್ಯವಾಗಿರುವ ನಮ್ಮ ನೆಚ್ಚಿನ ಅಜ್ಜಯ್ಯ ಜಿ.ವಿ. ಆ ಶ್ಲೋಕವನ್ನು ಅಮರಗೊಳಿಸಿದ್ದಾರೆ...
ಅವರ ಪೀಳಿಗೆಯಲ್ಲೇ ಹುಟ್ಟಿರುವ ನಮಗೆ,  ಅವರ ಜೀವನಶೈಲಿ ಮಾದರಿಯಾಗಿರಲಿ...

ಅಜ್ಜಯ್ಯನ ಬಗ್ಗೆ ಬರೆಯೋಣ ಅಂದಾಗ..ನನ್ನ ಮನಸಾಕ್ಷಿ ನನ್ನ ದೇಹದಿಂದ ಹೊರಗೆ ಬಂದು ನಿಂತು...ಕಿರುಚಿತು..

"ಆನೆಯ ಎತ್ತರಕ್ಕೆ ಹೊಗಳಲು ಪದಗಳು ತಲುಪಲು ಸಾಧ್ಯವೇ...
ಮಿಂಚಿನ ಕಣ್ಣು ಕೋರೈಸುವ ಕಾಂತಿಯ ಮುಂದೆ ಮಿನುಗುವ ದೀಪವೆ...
ಲಕ್ಷಾಧೀಶ ಆಗಿದ್ದರೆನಂತೆ ಮಾತಾಡುವಾಗ ಪದಗಳಿಗೆ ತಿಣುಕಾಡಿದಂತೆ 
ಆಗುತ್ತದೆ..ಸುಮ್ಮನೆ ಶುಭಾಶಯಗಳನ್ನು ಕೋರಿಬಿಡು.." ಅಂದಿತು..

ಅಲ್ಲವೇ ಎಷ್ಟು ನಿಜ..ಮನಸಾಕ್ಷಿ ಮಾತು..!

ಅಜ್ಜಯ್ಯ ನಿಮಗೆ ಶತಮಾನದ ಸಹಸ್ರ ನಮಸ್ಕಾರಗಳು, ಅಭಿನಂದನೆಗಳು...ಹಾಗೂ ಹುಟ್ಟು ಹಬ್ಬದ ಶುಭಾಶಯಗಳು 

ಕನ್ನಡದನಾಡಿನ ರನ್ನದ ರತುನ...ಇವರ ಬಗ್ಗೆ ಲೇಖನ..ನನ್ನ ಪಾಯಿಂಟ್ ಪಂಚರಂಗಿ ಬ್ಲಾಗಿನ ಸುವರ್ಣ ಕಾಣಿಕೆ..ವಾಹ್...ನನ್ನ ಬ್ಲಾಗ್ ಜೀವನ ಧನ್ಯವಾಯಿತು...!!!!

Saturday, July 14, 2012

ರಾಮು ಮಾವ ಭಾರತಿ ಅತ್ತೆ ವೈವಾಹಿಕ ಜೀವನದ ಬೆಳ್ಳಿ ಹಬ್ಬ


ಇಪ್ಪತ್ತೈದು ...
ವಸಂತಗಳು ನೋಡಿದ ವಯಸ್ಸು...
ವರ್ಷಗಳು ಸಾಗಿದ ಉದ್ಯೋಗ...
ವಾರಗಳು ಓಡಿದ ಚಲನ ಚಿತ್ರ...
ಸಂಚಿಕೆ ಬಿಡುಗಡೆಯಾದ ಪತ್ರಿಕೆ... 
ಇಪ್ಪತ್ತೈದು ...ರಜತ...ಬೆಳ್ಳಿ...ಸಂಭ್ರಮ...

ಈ ಪದವೇ ಎಷ್ಟು ಚಂದ ಕೇಳಲು...
ರಾಮು ಮಾವ ಅವರ ಮಾತಾ ಪಿತೃಗಳು (ನಂಜಪ್ಪ ಹಾಗು ವೆಂಕಟಲಕ್ಷ್ಮಮ್ಮ )
ಇವೆಲ್ಲ ನಮ್ಮ ಮಾನಸ ಪಟಲದಲ್ಲಿ ಹಾಗೆಯೇ ಉಳಿದುಬಿಡುತ್ತದೆ..

ಅಂತಹ ಒಂದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮಿಂದು ಎದ್ದ ದಂಪತಿಗಳು 
ಸಡಗರದಿಂದ ಓಡಾಡಿ ಬಂಧು ಮಿತ್ರರನ್ನು ಕರೆದು 
ಯಾರಿಗೂ ಗುಟ್ಟು ಬಿಟ್ಟುಕೊಡದೆ..
ಬಂದವರೆಲ್ಲರೂ ಸಿಹಿ ಭೂರಿ ಭೋಜನ ಉಂಡು... 
ಎಲೆ ಅಡಿಕೆ ಮೆದ್ದು ಹಾಯಾಗಿ ಕುಳಿತು 
ಲೋಕಾರೂಡಿ ಮಾತಾಡುತಿದ್ದಾಗ 
ತಣ್ಣಗೆ ಅಂದಿನ ಸಂಭ್ರಮದ ವಿಚಾರ ಹೇಳಿದಾಗ 
ಎಲ್ಲರಿಗೂ ಹಾಗೆ ಆನಂದಸಾಗರದಲ್ಲಿ ತೇಲಿದ ಅನುಭವ..

ವಿವಾಹ ಬಂಧನ ಎಷ್ಟು ಸುಮಧುರ, ಮಧುರ, ಅಮರ 
ಇದನ್ನು ನೋಡಿ ಸಂತಸಪಡಬೇಕಾದ ಸುಂದರ ಸಂಸಾರ 
ನಮ್ಮ ರಾಮು ಮಾವ ಹಾಗು ಭಾರತಿ ಅತ್ತೆ ಅವರದು...
ಮಾತಾ-ಪಿತೃಗಳ ಸದಾ ಆಶೀರ್ವಾದದ ಅಭಯಹಸ್ತ
ವೆಚ್ಚಕ್ಕೆ ಸ್ವಲ್ಪ ಹೊನ್ನು..
ಮನ, ಮನೆ  ಮೆಚ್ಚಿದ ಮನದನ್ನೆ...
ಮನವರಿತ ಸುತ..
ಎಲ್ಲವನ್ನು ಒಂದೇ ಸೂರಿನಡಿ ಇರಿಸಿಕೊಂಡ  "ಕಲ್ಲೇಶ"ನ  ಕೃಪೆ...
ಇವೆಲ್ಲ ಇರುವಾಗ ಸ್ವರ್ಗದ ಹಂಗೇಕೆ..
ಕಲ್ಲೇಶ ಕೃಪಾ.
ರಾಮು ಮಾವ..ಭಾರತಿ ಅತ್ತೆ..
ಎಂದೆಂದೂ ಹೀಗೆ ನಗಬೇಕು ..
ಎಲ್ಲರ ಬಾಳಲ್ಲಿ ಆನಂದ ತರಬೇಕು...
ಸ್ವರ್ಗ ನಾಚುತ್ತ ಕಾಲಡಿ ಬರಬೇಕು...
ಎಂದೂ ಜೊತೆಯಾಗಿ ನೀವು ಹೀಗೆ ಇರಬೇಕು... 
ರಾಮು ಮಾವ, ಭಾರತಿ ಅತ್ತೆ , ಭಾರ್ಗವ 
ರಾಮು ಮಾವ ಭಾರತಿ ಅತ್ತೆ ನಿಮ್ಮ ವೈವಾಹಿಕ ಜೀವನದ ಬೆಳ್ಳಿ ಹಬ್ಬಕ್ಕೆ ನಿಮ್ಮ ಪ್ರೀತಿಯ ಅಕ್ಕ-ಭಾವ (ವಿಶಾಲು-ಮಂಜಣ್ಣ) ಅವರಿಂದ ಒಂದು ನೆನಪಿನ ಕಾಣಿಕೆ... 

Thursday, June 21, 2012

Lakshmi came to meet Shiva

Umapathy was busy on a day on his routine job..


Suddenly a gate pass came to his desk..screaming for his attention...

"Hey Uma..you got a good news..!!!!"

"Whats that?"

"Normally devotees who come to meet Shiva will be Ganesha, Basavanna and all..But Lakshmi is calling to meet you..Please hurry up..!!!!"

"What? Lakshmi is calling me...that is a good news..Where is she?"

"She is with your wife...since she is just about few hours old..she can not come to meet to you..!!!"

Uma..rushes to meet his wife..where there is a cute angle looking around to see her papa with a smile

hello papa..!!! she gives a simple smile..

and Uma over the clouds nine..

Congratulations Uma & family for being a proud parents of a wonderful girl child!!!!

Wednesday, June 20, 2012

ಆಷಾಡದಲ್ಲಿ ಹೊಸ ಜೋಡಿ ಹಕ್ಕಿಗಳು ಯಾಕೆ ಬೇರೆ ಬೇರೆ ಇರುತ್ತಾರೆ ಗೊತ್ತೇ !!!!

ನಮ್ಮ ಮಾಧ್ಯಮಗಳು ನಮ್ಮ ಆಚಾರ-ವಿಚಾರಗಳ ಬಗ್ಗೆ ತಿಳಿಸುವ ವಿಚಾರ ಲಹರಿ...(ಒಂದು ಅಣಕು ನೋಟ)


ವೀಕ್ಷಕರೆ...ಆಷಾಡ  ಮಾಸದಲ್ಲಿ ಹೊಸದಾಗಿ ಮದುವೆಯಾದ ಜೋಡಿ ಯಾಕೆ ಬೇರೆ ಬೇರೆ ಇರುತ್ತಾರೆ ಗೊತ್ತೇ...?
ಆಷಾಡಕಿಂತ ಮುಂಚೆ  ಹೊಸದಾಗಿ ಮದುವೆಯಾದಾರೆ...ಗಂಡ ಹೆಂಡತಿ ಒಂದೇ ಸೂರಿನಡಿ ಇರಬಾರದು ಗೊತ್ತೇ..?
ಒಂದೇ ಸೂರಿನಡಿ ಅಂದ್ರೆ ಒಂದೇ ಹೊಸಲನ್ನು ದಾಟಬಾರದು
ಮರ ಗಿಡ, ಮದುವೆ ಆಲ್ಬಮ್, ಹೊಸ ಜೋಡಿಗಳನ್ನ ತೋರಿಸುತ್ತ..ಕಾಲಹರಣ...

ಈ ವಿಷಯದಲ್ಲಿ ಇನ್ನು ಸ್ವಲ್ಪ ವಿಷಯ ತಿಳಿಯೋಣ ಒಂದು ಪುಟ್ಟ ಬ್ರೇಕ್ ನಂತರ...
ನಾಲ್ಕು ಐದು ನಿಮಿಷದ ಜಾಹಿರಾತುಗಳ ನಂತರ 

ವೀಕ್ಷಕರೆ..ಆಷಾಡ ಮಾಸದ ಬಗ್ಗೆ ಮಾತಾಡ್ತಾ ಇದ್ದೀವಿ..
ಆಷಾಡ ಮಾಸ ಜೋಡಿಗಳಿಗೆ ವಿರಹ ವೇದನೆ ಕೊಡುತ್ತೆ..ಯಾಕೆ ಗೊತ್ತೇ..
ಮರ ಗಿಡ, ಮದುವೆ ಆಲ್ಬಮ್, ಹೊಸ ಜೋಡಿಗಳನ್ನ ತೋರಿಸುತ್ತ..ಕಾಲಹರಣ...

ಈ ವಿಷಯದಲ್ಲಿ ಇನ್ನು ಸ್ವಲ್ಪ ವಿಷಯ ತಿಳಿಯೋಣ ಒಂದು ಪುಟ್ಟ ಬ್ರೇಕ್ ನಂತರ...
ನಾಲ್ಕು ಐದು ನಿಮಿಷದ ಜಾಹಿರಾತುಗಳ ನಂತರ 
ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಂದೇ ಹೊಸಿಲನ್ನು ದಾಟಬಾರದು. 
ಹೊಸದಾಗಿ ಮದುವೆ ಗಂಡ ಹೆಂಡತಿ ಕೂಡ ಒಂದೇ ಹೊಸಿಲನ್ನು ದಾಟಬಾರದು..
ಗಂಡ ಹಾಗು ಅತ್ತೆ ಮುಖ ನೋಡಬಾರದು..
ವೀಕ್ಷಕರೆ..ಆಷಾಡ ಮಾಸದಲ್ಲಿ ಹೊಸಜೋಡಿಗಳು ಏತಕ್ಕೆ ವಿರಹವೇದನೆ 
ಅನುಭವಿಸುತ್ತಾರೆ..ಎನ್ನುವ ವಿಷಯ ನಿಮಗೆ ತಿಳಿಯಿತು..
ಮುಂದಿನವಾರ ಇನ್ನೊಂದು ವಿಷಯದ ಬಗ್ಗೆ ತಿಳಿದುಕೊಳ್ಳೋಣ..ನಮಸ್ಕಾರಾ..

Sunday, June 17, 2012

Happy Birthday Wishes for a great soul!!!!!

Water, Light, Tunnel, Rain....inspiration for the this world...

Water springs from a small vent in some corner of the mountain...but gradually it gathers momentum, takes anything and everything on its way, makes the land fertile to help the man kind to grow whatever they want.  
Light takes birth from the the sun..it travels all the way to earth in eight minutes..it will light up everything it can, allows seeds, flowers, plants to blossom, creates many shadows for the shelter!!!
Tunnel gets in to any mountains, rocks to help the people to cross one barrier after the other...thus reducing the transit time in the travel.
Rain is the result of clouds cooking its food in its own den..it sends water to the world of living beings to make their life better.
You are one such wonderful soul where you have the force of Water, speed of Light, generosity of a Tunnel, and free flow like the Rain....it is my privilege  to wish you a wonderful moments on your birthday!!!

Happy Birthday Chay..Have a great days and years ahead!!!!

Monday, May 28, 2012

ಮಗುವಿನ ವಿವಾಹದ ಮೊದಲ ವಾರ್ಷಿಕೋತ್ಸವ


ಓಹ್ ಗಣೇಶ..ಆಗಲೇ ಒಂದು ವರುಷ ಆಗಿ ಬಿಟ್ಟಿದೆ..ಎಂತಹ ಸುವರ್ಣ ಘಳಿಗೆ ಮತ್ತೆ ಬಂದಿದೆ..

ನನ್ನ ಗುರುಗಳು ಇವತ್ತು ಏನಾದರು ತರಲೆ ಬ್ಲಾಗ್ ಕಲಿಸಿರುತ್ತಾರೆ..ಅದು ಪಕ್ಕ..

ಮೇಲ್ ಬಾಕ್ಸ್ ಚೆಕ್ ಮಾಡಿದಾಗ ಯಾವುದು ಮೇಲ್ ಇರೋದಿಲ್ಲ..

ಗುರುಗಳೇ..ಯಾಕೆ ಹೀಗೆ ಮಾಡಿದಿರಿ...ಅಂತ ಕೇಳೋಕೆ ಫೋನ್ ಮಾಡೋಣ ಅಂದುಕೊಳ್ಳುವಷ್ಟರಲ್ಲಿ..

ಪಿಂಗ್...ಟಾಸ್ಕ್ ಬಾರ್ ಬ್ಲಿಂಕ್ ಆಗೋಕೆ ಶುರುವಾಗುತ್ತೆ..
"ಮಗುವೆ ಗುಡ್ ಮಾರ್ನಿಂಗ್..." "ಮಗು ಎಂದಿದೆ ಮಂಜಿನ ಬಿಂದು..."

"ಮಗು ನಲಿ ಎಂದಿದೆ ಜೀವನದ ಬಿಂದು.."

"ಸುಂದರವಾದ ಜೀವನದಲ್ಲಿ ಒಂದು ಹೊಸತನ ಪ್ರಾರಂಭವಾದ ದಿನ..."

"ವಿಧ್ಯೆ ಇದೆ...ಶ್ರೀ ಇದೆ..ಅದಕ್ಕೆ ಕಳಶವಾಗಿ ನವೀನವಾದ ಹೊಸತನ ಇದೆ.."

"ಇದೆ ಅಲ್ವೇ ಜೀವನದ ಅಮೂಲ್ಯ ಕ್ಷಣಗಳು..."

"ಮಗುವೆ ಮೊದಲ ವರುಷದ ಹರುಷ ಸದಾಕಾಲ ನಾವಿನ್ಯತೆ ಇಂದ ಅವಿರತವಾಗಿ ನಿನ್ನ ಬಾಳಲ್ಲಿ ಇರಲಿ..."
ನನ್ನ ಶುಭ ಹಾರೈಕೆಯನ್ನು ನವೀನ ಅವರಿಗೂ ತಿಳಿಸು"

ಗುರುಗಳೇ..ನೀವು ಎಷ್ಟು ವಿಚಿತ್ರಾನೋ..ನಿಮ್ಮ ಹಾರೈಕೆ ಕೂಡ ಅಷ್ಟೇ ವಿಚಿತ್ರ...? ನಿಮ್ಮ ಹಾರೈಕೆಗೆ ಶಿರ ಬಾಗಿ ವಂದಿಸುವೆನು...

"ಮಗುವೆ ನಿನಗೋಸ್ಕರ...ಕೆಲವು ಸಾಲುಗಳು!!!!!!!!!!!    
ಎಂತ ಸೊಗಸು ಮಗುವಿನ ಮನಸು..
ಎಂಥ ಸೊಗಸು ಮಗುವಿನ ಕನಸು...
ಕನಸೆಲ್ಲ ನನಸಾಗಲಿ..ನನಸಾದ ಕನಸೆಲ್ಲ ಸಿದ್ಧಿಸಲಿ...
ಸಿದ್ದವಾದ ಕನಸೆಲ್ಲ ಮತ್ತೆ ನನಸಾಗಲಿ..
ಜೀವನ ಮಂಗಳಮಯವಾಗಿರಲಿ...
ಮಂಗಳದ ಈ ಸುದಿನ ಮಧುರವಾಗಲಿ..

Friday, May 25, 2012

ಪ್ರಕಾಶ ಅಣ್ಣ - ಆಶಾ ಅತ್ತಿಗೆ ನಿಮಗೆ ವಿವಾಹ ದಿನದ ಶುಭಾಶಯಗಳು

ಶಿವ ತನ್ನೊಳಗೆ ತಾನು ನಗುತಿದ್ದಾಗ ಪಾರ್ವತಿ..

"ಏನೂಂದ್ರೆ ಒಬ್ಬರೇ ನಗುತ್ತ ಇದ್ದೀರಾ? ಏನು ಸಮಾಚಾರ...!!!"

"ಏನಿಲ್ಲ ಪಾರು..ನಾನು ನನ್ನ ಮಡದಿಯನ್ನ ತಲೆಯ ಮೇಲೆ ಕೂರಿಸಿಕೊಂಡೆ.."

"ಅದಕ್ಕೆ"

"ಪೂರ ಕೇಳು...ನಮ್ಮ ಲಕ್ಷ್ಮಿಕಾಂತ ವಕ್ಷಸ್ಥಲದಲ್ಲಿ ತನ್ನ ಮನದನ್ನೆಯನ್ನ ಇರಿಸಿಕೊಂಡ

"ಹೂಊಊ"

ನಮ್ಮ ಚತುರ್ಮುಖ ಸರಸುವನ್ನು ಸದಾ ತನ್ನ ಬಳಿಯಲ್ಲಿಯೇ ಇರಿಸಿಕೊಂಡು ಸುಮಧುರ ವೈಣಿಕ ಗಾನವನ್ನು ಸವಿಯುತಿದ್ದಾನೆ"

"ಸರಿ"

"ಭೂಲೋಕದಲ್ಲಿ ಇವರೆಲ್ಲರನ್ನು ಮೀರಿಸಿದ ಒಬ್ಬ ಬ್ರಹ್ಮ ಇದ್ದಾರೆ"

"ಹೌದೆ!! ಯಾರು ಅದು"?

"ತನ್ನ ಕುಶಲತೆಯಿಂದ ಗೃಹ, ಮನೆಗಳನ್ನೂ ಕಟ್ಟುತ್ತ..ಅಷ್ಟೇ  ಕುಶಾಗ್ರಮತಿಯಿಂದ ಪದಗಳನ್ನು ಜೋಡಿಸುತ್ತ..ಎಷ್ಟೋ ಸ್ನೇಹಿತರಿಗೆ ಒಳ್ಳೆಯ ಸ್ನೇಹಿತರಾಗಿ , "ತಂಗಿಯರಿಗೆ" ಅಣ್ಣನಾಗಿ, ತೆಳ್ಳಗಿರುವರಿಗೆ "ಡುಮ್ಮಣ್ಣನಾಗಿ" ರಂಜಿಸುತ್ತಿರುವ...ಪ್ರಕಾಶ..ತನ್ನ ಹೆಸರಲ್ಲೇ ತನ್ನ ಮನದನ್ನೆಗೆ ಜಾಗ ಕೊಟ್ಟಿರುವುದು ಎಷ್ಟು ಚೆಂದ ಅಲ್ವ..."

"ಓಹ್ ಹೌದು..ನಾನು ಅವರ ಬಗ್ಗೆ ಕೇಳಿದ್ದೆ..ಅವರ "ಹೆಸರೇ ಬೇಡ"..."ಇದೆ ಅದರ ಹೆಸರು" ಪುಸ್ತಕಗಳನ್ನು ಓದಿದ್ದೆ..ಎಷ್ಟು ಶಾಣೆ ಇದೆ ಅವರ ಬರಹ.....ಓಹ್ ಹೌದು..ಇಂದು ಅವರ ವಿವಾಹವಾದ ದಿನ...ಅಲ್ಲವೇ"

"ಹೌದು ಪಾರು..ಅದಕ್ಕೆ ನಿನಗೆ ಅವರ ಪರಿಚಯ ಮಾಡಿಸೋಣ ಅಂತ ಅಂದುಕೊಂಡರೆ..ನಿನಗೆ ಅವರ ಬಗ್ಗೆ ಎಲ್ಲವು ಗೊತ್ತು..ಒಳ್ಳೆಯದೇ ಆಯಿತು ಬಿಡು..."

"ಹೌದೂ ಅಂದ್ರೆ...ಅವರಿಗೆ ಸದಾ ಅವರ ಆಶಯ, ಕನಸು, ಮನಸು, ಗೆಲುವು ಎಲ್ಲವು ಸಿಮೆಂಟ್, ಮರಳು, ನೀರಿನ ಹಾಗೆ ಬೆರೆತು..ಯಶಸ್ವಿ ಆಶಾ ಕಟ್ಟಡದಲ್ಲಿ ಪ್ರಕಾಶಮಾನರಾಗಿ ಆಶಿಶ್  ಸೌಧದಲ್ಲಿ  ಸುಖ ಸಂತೋಷದಲ್ಲಿ ಬೆಳಗಲಿ ಎಂದು ಹಾರೈಸೋಣ..."

ಪ್ರಕಾಶಿಶ್  (ಪ್ರಕಾಶ..ಆಶಾ..ಆಶೀಶ್) ಸುಖ, ಸಂತೋಷ, ನೆಮ್ಮದಿ ನಿಮ್ಮದಾಗಲಿ..

Monday, May 14, 2012


ಆಶಾ ದೇವಿ ಹಾಗು ವಿಷ್ಣು ಜನುಮದಿನ ಶುಭಾಶಯಗಳು (.ತಡವಾಗಿ)



ಗಣೇಶ : ಎಲವೋ ಶ್ರೀಕಾಂತ ...ನಿನ್ನೆ ನಿಮ್ಮ ಕುಟುಂಬ ಇಬ್ಬರದು ಜನ್ಮ ದಿನವಾಗಿತ್ತು..ನಿನ್ನ ಕಡೆಯಿಂದ  
            ಯಾವ ಮಿನ್ಚಂಚೆ ಕೂಡ  ಬರಲಿಲ್ಲ

ಶ್ರೀ: ಹೌದು ಭಗವಂತ...ನಿನ್ನೆ ನಾನು ಕ್ಷೀರ ಸಾಗರಕ್ಕೆ ಹೋಗಿದ್ದೆ..ಹಾಗಾಗಿ ಕಳಿಸಲು ಆಗಲಿಲ್ಲ..

ಗಣೇಶ : ಏನು?!...ಕ್ಷೀರ ಸಾಗರವೇ.? ಅಲ್ಲಿ ನಾರಾಯಣ ಮತ್ತು ಲಕ್ಷ್ಮಿ ಅಮ್ಮನವರ ಕುಟುಂಬ 
            ಕ್ಷೇಮವಾಗಿರುವರೆ?

ಶ್ರೀ: ಇಲ್ಲ..ನಾನು ಹೋಗಿದ್ದು..ಭಾರತ ಭೂಪಟದಲ್ಲಿ ಗೋವಾದಲ್ಲಿರುವ ಒಂದು ಜಲಪಾತ ಅದು..

ಗಣೇಶ: ಓಹ್ ಸರಿ ಸರಿ..ಹಾಗಾದರೆ..ನಾನೇ ಅವರಿಬ್ಬರಿಗೆ ಆಶಿರ್ವಾದಮಾಡುತ್ತೇನೆ..ಸರಿ ನಾ...

ಶ್ರೀ: ನಿಮ್ಮ ಮಾತಿಗೆ ಎದುರಾಡುವರು ಈ ಭುವನದಲ್ಲಿ ಅವರಾರಿರುವರು...ಸರಿ  ಹಾಗೆಯೇ ಮಾಡಿರಿ 

ಗಣೇಶ: ಆಶಾ ಜನುಮದಿನದ ಶುಭಾಶಯಗಳು...ಹಿಂದುಸ್ಥಾನವು ಎಂದು ಮರೆಯದ ನನ್ನ ತರಹ ಮುದ್ದಾದ 
           ಒಂದು ಆರೋಗ್ಯಪೂರ್ಣ ಪುತ್ತಳಿ ಜನ್ಮಿಸಲಿ..
          ವಿಷ್ಣುವೇ ನನ್ನನ್ನು ನೂರಾರು ಬಗೆಯಲ್ಲಿ ಚಿತ್ರಿಸಿ..ನನ್ನನ್ನು ಇನ್ನು ಸುಂದರವಾಗಿ, ಅನೇಕ ಭಂಗಿಯಲ್ಲಿ 
          ಚಿತ್ರಿಸುವ ಕಲೆ ನಿನಗೆ ಸಿದ್ಧಿಸಲಿ.
          ನಿಮ್ಮಿಬ್ಬರಿಗೂ ಜನುಮದಿನ ಶುಭಾಶಯಗಳು..ತಡವಾಗಿಯಾದರೂ ನನ್ನ ಆಶೀರ್ವಾದ ನಿಮಗೆ 
          ತಲುಪಲಿ...
    
ಇಂತಿ ನಿಮ್ಮ
ಶ್ರೀ ಗಣೇಶ 
S/O ಮಂಜುನಾಥ 
ವಿಭೂತಿ ಬೀದಿ..
ರುದ್ರಾಕ್ಷಿ ಪುರ 
ನಂದಿ ದುರ್ಗಾ, ಪಾರ್ವತಿ ಹೋಬಳಿ
ಕೈಲಾಸ ೫೬೦೦೪೦

Thursday, March 1, 2012

Pritesh Weds Sweety

God makes his presence everywhere...

But he can not be seen..but only he can be felt by the emotions..

Emotions are in the heart...

When heart beats, and says hello..

There is a similar symphony of heart beat from the otherside..


When there is a space between the two hearts...


There exists an emotion, affection called Love


When two people hold their hands together to make an joyous occassion..there happens the   marriage..

 Wish  you happy married life..have a wonderful, melodious, delicious life ahead..

Monday, January 2, 2012

Christy's family blessed with a girl baby

Christy the name itself brings the tale that....follow the leader

When he is around..nothing is impossible because for the sole reason that he assures he is there for all occassions...

When angel is walking down to the earth, she sees the majestic charm of him..

and she bless him a glorious gift for the christmas

a rare occasion where the gift for the life is full of life..

A woman blessed with a baby itself a great gift for the life..

Christy and family a wonderful year ahead..with st.mary's stepping in to your life..